ಮದುವೆಯಾದ ಮರುದಿನವೇ ಉಸಿರಾಟದ ತೊಂದರೆಯಿಂದ ಆಸ್ಪತ್ರೆ ಸೇರಿದ ಮದುಮಗ ಕೊರೊನಾದಿಂದ ಸಾವು | ಜನತಾ ನ್ಯೂಸ್
ವಿಜಯಪುರ : ಮುದ್ದೇಬಿಹಾಳ ತಾಲ್ಲೂಕಿನ ಡೊಂಕಮಡು ಗ್ರಾಮದ ಆನಂದರಾಜ್ ಸಿದ್ದಪ್ಪ ಪೂಜಾರಿ (28) ಎನ್ನುವವರು ವಾರದ ಹಿಂದಷ್ಟೆ ಹಸೆಮಣೆ ಏರಿದ್ದರು, ಇಂದು ಕೊರೊನಾದಿಂದ ಸಾವಿಗೀಡಾಗಿದ್ದಾರೆ.
ಸಿವಿಲ್ ಎಂಜಿನಿಯರಿಂಗ್ ಪದವೀಧರರಾಗಿದ್ದ ಇವರು ರೈಲ್ವೆಯಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆರು ತಿಂಗಳ ಹಿಂದೆ ಅನಾರೋಗ್ಯದಿಂದ ಕೆಲಸ ಬಿಟ್ಟು ವಿಜಯಪುರದಲ್ಲಿ ವಾಸವಾಗಿದ್ದರು.
ವಿಜಯಪುರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 25 ರಂದು ಇವರ ಮದುವೆ ನಿಶ್ಚಿತವಾಗಿತ್ತು. ಆದರೆ, ಕೊರೊನಾ ಲಾಕ್ ಡೌನ್ ಜಾರಿಯಾಗುತ್ತದೆ ಎಂಬ ಕಾರಣಕ್ಕೆ ಎರಡು ದಿನಗಳ ಮೊದಲೇ ಅಂದರೆ ಏಪ್ರಿಲ್ 23ರಂದು ಇವರ ಮದುವೆಯನ್ನು ಪೋಷಕರು ತರಾತರಿಯಲ್ಲಿ ಮನೆಯಲ್ಲೇ ನೆರವೇರಿಸಿದ್ದರು ಎನ್ನಲಾಗಿದೆ.
ಮದುವೆಯಾದ ಮರುದಿನವೇ ಉಸಿರಾಟದ ತೊಂದರೆಯಿಂದ ವಿಜಯಪುರದಲ್ಲಿ ಆಸ್ಪತ್ರೆ ಸೇರಿದ್ದ ಅವರು ಕೊರೊನಾದಿಂದ ಸಾವಿಗೀಡಾಗಿದ್ದಾರೆ.